ತವರೂರ ಹಾದಿಯಲಿ

ತವರೂರ ಹಾದಿಯಲಿ ಹೂವು ಚೆಲ್ಲಿ
ಎನ್ನ ಮನೆಯ ಬೆಳಗುವಲ್ಲಿ
ಹೊನ್ನ ಕುಡಿಯ ತಾರೆಂದು ಒಡಲ
ಮಡಿಲ ತುಂಬಿ ಬಾರೆಂದು ಹೇಳಿ
ಹೋದಿರಿ! ಎನ್ನ ಸಖಾ ನಾನಿಲುವೇನೆ ||

ನಿಮ್ಮ ಮನೆಯ ಬೆಳಗುವ
ದೀಪವೆಂದೂ ಆರದೆ ಉಳಿಸುವೆ
ನಿಮ್ಮದೇ ಭಾವದುಸಿರಲಿ ನಿಮ್ಮ
ಒಲವ ಕಾಯುವೆ ಬರಬಾರದೆ ಸಖ
ಚಂದಿರ ಬೆಳಕು ಚೆಲ್ಲುವ ನಭಕೆ ||

ಬಾಳ ಒಲವಿನ ಪಯಣದಲ್ಲಿ
ಕೈ ಹಿಡಿದು ನಡೆಸಿದಿರಿ
ನೋವು ನಲಿವಲ್ಲಿ ಆಸರೆಯಾದಿರಿ
ಮರೆತು ಬಿಡಲು ನಿಮ್ಮನು
ಗೊಂಬೆಯಾಟ ಅಲ್ಲ ಇದು ತಿಳಿಯಿರಿ ||

ಎನ್ನ ಜೀವನದ ಉಸಿರಾಗಿ
ಮನದಂಗಳದಲ್ಲಿ ಮನೆ ಮಾಡಿದಿರಿ
ಭಾವನೆಗಳ ತೋಳ್ ತೆಕ್ಕೆಯಲಿ
ಬಿಗಿದೆನ್ನ ನಗಿಸಿ ಮನದರಸಿ ನೀ
ಎಂದದ್ದು ನೆನಪಿದೆಯಾ ಸಖ ||

ಉರಿಯುವುದೆ ಎಣ್ಣೆ ಇಲ್ಲದಾ ದೀಪ
ಒಲಿಯುವನೇ ಭಕ್ತಿ ಇಲ್ಲದೆ ದೇವನು
ಬದುಕುವುದೆ ನೀರಿಲ್ಲದೆ ಮೀನು
ನೀವಿಲ್ಲದೆ ಎನಗೆ ಯಾರು ಆಸರೆ
ಎನ್ನ ಮನದಲೀ ತುಂಬಿರುವಿರಿ ನೀವು ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೀನಿಯರ್ ಕ್ರಿಕೆಟಿಗನ ಸಂಜೆ
Next post ಸಂಜೆ

ಸಣ್ಣ ಕತೆ

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

cheap jordans|wholesale air max|wholesale jordans|wholesale jewelry|wholesale jerseys